ಭಾನುವಾರ, ಜನವರಿ 12, 2025

ಶಬ್ಧ ಕೋಶ

ಇಲಾಖೆ ಬಿಡುಗಡೆ ಮಾಡಿರುವ ಕನ್ನಡ English. Dictionary ಶಿಕ್ಷಕರಿಗೆ ಮಕ್ಕಳಿಗೆ ಉಪಯುಕ್ತ ಮಾಹಿತಿ 



ಶಬ್ಧ ಕೋಶ<<<<<<<1 ರಿಂದ 5ನೇ ತರಗತಿ ಗೆ ಇಲ್ಲಿ ಕ್ಲಿಕ್ ಮಾಡಿ

6-8ನೇ ತರಗತಿ  ಗೆ <<<<ಇಲ್ಲಿ ಕ್ಲಿಕ್ ಮಾಡಿ

ಮಂಗಳವಾರ, ಜೂನ್ 7, 2022

ಕಲಿಕಾ ಚೇತರಿಕೆ

    

ಕ್ರ.ಸಂತರಗತಿವಿಷಯಶಿಕ್ಷಕರ ಕೈಪಿಡಿಕಲಿಕಾ ಹಾಳೆಗಳು
11   ರಿಂದ 3ಕನ್ನಡ ಮತ್ತು ಗಣಿತವಿದ್ಯಾ ಪ್ರವೇಶನಿಪುಣ್ ಭಾರತ್ 
________________________________________________________________________________
ಕ್ರ.ಸಂ   ತರಗತಿ        ವಿಷಯ ಶಿಕ್ಷಕರ ಕೈಪಿಡಿ ಕಲಿಕಾ ಹಾಳೆಗಳು
11 ನೇ ತರಗತಿಕನ್ನಡ-----Download
21 ನೇ ತರಗತಿಗಣಿತ-----Download
32 ನೇ ತರಗತಿಕನ್ನಡ-----Download
42 ನೇ ತರಗತಿಗಣಿತ-----Download
53 ನೇ ತರಗತಿಕನ್ನಡ-----Download
63 ನೇ ತರಗತಿಗಣಿತ-----Download
________________________________________________________________________________


 

ಕ್ರ.ಸಂತರಗತಿವಿಷಯಶಿಕ್ಷಕರ ಕೈಪಿಡಿಕಲಿಕಾ ಹಾಳೆಗಳು
14ಕನ್ನಡDownloadDownload
24ಇಂಗ್ಲೀಷ್DownloadDownload
34ಗಣಿತDownloadDownload
44ಪರಿಸರ ಅಧ್ಯಯನDownloadDownload
55ಕನ್ನಡDownloadDownload
65ಇಂಗ್ಲೀಷ್DownloadDownload
75ಗಣಿತDownloadDownload
85ಪರಿಸರ ಅಧ್ಯಯನDownloadDownload

ಶುಕ್ರವಾರ, ಅಕ್ಟೋಬರ್ 18, 2019

ತುಟ್ಟಿಭತ್ತೆ ಹೆಚ್ಚಳದ ಮಾಹಿತಿ

*ಕರ್ನಾಟಕ ಸರ್ಕಾರದ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ* ಆದೇಶಗಳು ದಿನಾಂಕ 01-01-1987ರಿಂದ 01-07-2017 (ಡಿಸೆಂಬರ್ 2017ರ ವರೆವಿಗೆ ಅನ್ವಯ)ರವರೆಗೂ
*ದಿನಾಂಕ ಹೆಚ್ಚಳ - *ಶೇಕಡ
01-01-1987- 4% 
01-07-1987- 8% 
01-01-1988- 13% 
01-07-1988- 19% 
01-01-1989- 24% 
01-07-1989- 29% 
01-01-1990- 33% 
01-07-1990- 37% 
01-01-1991- 45% 
01-07-1991 54% 
01-01-1992- 65% 
01-07-1992- 76% 
01-01-1993- 85% 
01-07-1993- 90% 
01-01-1994- 96% 
01-07-1994- 106% 
01-01-1995- 116% 
01-07-1995- 127% 
01-01-1996- 138% 
01-07-1996- 149% 
01-01-1997- 160% 
01-07-1997- 171% 
01-01-1998- 178% 
01-07-1998 - 192%
01-04-1998- 16%
01-07-1998- 22%
01-01-1999 - 32%
01-07-1999 - 37%
01-01-2000 - 38%
01-07-2000- 41%
01-01-2001- 43%
01-07-2001- 45%
01-01-2002- 49%
01-07-2002- 52%
01-01-2003- 55%
01-07-2003 59%
01-01-2004- 61%
01-07-2004- 64%
01-01-2005- 67%
01-07-2005- 71%
01-01-2006- 74%
01-07-2006- 79%
01-04-2006- 2.625%
01-07-2006- 7%
01-01-2007- 12.25%
01-07-2007- 17.50%
01-01-2008- 22.75%
01-07-2008- 26.75%
01-01-2009- 32.75%
01-07-2009- 38%
01-01-2010- 46%
01-07-2010- 56.25%
01-01-2011- 62.50%
01-07-2011- 69.50%
01-01-2012- 76.75%
01-07-2012- 4%
01-01-2013- 9%
01-07-2013- 15%
01-01-2014- 21%
01-07-2014- 25.25%
01-01-2015- 28.75%
01-07-2015- 32.50%
01-01-2016- 36%
01-07-2016- 40.25%
01-01-2017- 43.25%
01-07-2017- 45.25%
01-01-2018- 1.75%
01-01-2019-  6.5%
01-07-2019- 11.25(6.5+4.75)

ಶುಕ್ರವಾರ, ನವೆಂಬರ್ 9, 2018

Nenapina doniyalli -(kuvempu autobiography)video bio-pic.mp3

Mk Gandhi's autobiography in kannada

Gandhi's autobiography

Ramayana darshanam

ಮಂಗಳವಾರ, ನವೆಂಬರ್ 6, 2018

ದೀಪಾವಳಿ ಹಬ್ಬದ ಆಚರಣೆಗೆ 12 ಕಾರಣಗಳು

ಭಾರತದಲ್ಲಿ ದೀಪಾವಳಿಯ ಆಚರಣೆಗೆ 12 ವಿವಿಧ ಕಾರಣಗಳು ಇವೆ!! ಹೌದು.. ಪ್ರತಿಯೊಂದು ಕಾರಣವು ವಿವಿಧ ರೀತಿಯ ಅರ್ಥವನ್ನು ನೀಡುತ್ತಾ, ಈ ಒಂದು ಹಬ್ಬಕ್ಕೆ ಹೆಚ್ಚಿನ ಮಹತ್ವವನ್ನು ನೀಡುವಲ್ಲಿ ಕಾರಣವಾಗಿರುವುದಂತೂ ನಿಜ!! ದೀಪಾವಳಿ ಎಂದರೆ ಭಾರತೀಯರಿಗೆ ಭಾಗ್ಯ ತರುವ ಹಬ್ಬ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ!! ಹಾಗಾದರೆ, ನಮ್ಮ ಭಾರತ ದೇಶದಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಲು ಮುಖ್ಯವಾದ ಕಾರಣವೇನು ಗೊತ್ತೇ??

ದೀಪಾವಳಿ ಲಕ್ಷ್ಮೀ ದೇವತೆಯ ಹುಟ್ಟುಹಬ್ಬ

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವತೆಯ ಹುಟ್ಟು ಹಬ್ಬವೇ ದೀಪಾವಳಿ. ಯಾಕೆಂದರೆ, ಕ್ಷುಲ್ಲಕ ಸಮುದ್ರದ ಅರಸನ ಮಗಳು ಲಕ್ಷ್ಮೀ ದೇವತೆಯಾಗಿದ್ದು, ಈಕೆ ಕಾರ್ತಿಕ ತಿಂಗಳ ಅಮಾವಾಸ್ಯೆಯ ದಿನದಂದು ಹುಟ್ಟಿದಳು ಎಂದು ಪುರಾಣಗಳು ತಿಳಿಸಿವೆ. ಅಷ್ಟೇ ಅಲ್ಲದೇ, ಲಕ್ಷ್ಮೀಯು ತನ್ನ ಹುಟ್ಟುಹಬ್ಬದ ದಿನದ ರಾತ್ರಿಯಲ್ಲಿ ವಿಷ್ಣುವಿನೊಂದಿಗೆ ವಿವಾಹವಾದಳು ಎನ್ನುವುದನ್ನು ಹೇಳಲಾಗಿದೆ!! ಹಾಗಾಗಿ ಲಕ್ಷ್ಮೀ ದೇವಿಯು ಭಗವಾನ್ ವಿಷ್ಣುವಿನೊಂದಿಗೆ ವಿವಾಹವಾದ ಸಂದರ್ಭದಲ್ಲಿ ಈಡೀ ಲೋಕವು ಅದ್ಭುತವಾದ ದೀಪಾಲಂಕಾರಗಳಿಂದ ಕಂಗೊಳಿಸಿತ್ತು. ಹಾಗಾಗಿಯೇ ದೀಪಾವಳಿಯ ಹಬ್ಬದ ದಿನದಂದು ದೀಪಗಳೊಂದಿಗೆ ಲಕ್ಷ್ಮೀ ದೇವಿಯನ್ನು ಹಿಂದೂಗಳು ತಮ್ಮ ಮನೆಗಳಿಗೆ ಬರಮಾಡಿಕೊಳ್ಳುತ್ತಾರೆ!!

ಭಾಗವತ ಪುರಾಣದ ಪ್ರಕಾರ

ಅತ್ಯಂತ ಪವಿತ್ರವಾದ ಭಾಗವತ ಪುರಾಣದ ಪ್ರಕಾರ ವಿಷ್ಣುವಿನ 5 ನೇ ಅವತಾರವೇ ವಾಮನ ಅವತಾರ!! ತೇತ್ರಾಯುಗದಲ್ಲಿ ಹಿರಣ್ಯಕಶಿಪುವಿನ ಮರಿಮೊಮ್ಮಗನಾದ ಬಲಿ ಚಕ್ರವರ್ತಿಯು ಇಂದ್ರನನ್ನು ಗೆದ್ದು ಮೂರು ಲೋಕಗಳ ಅಧಿಪತಿಯಾಗುತ್ತಾನೆ. ಭೂಮಿಯ ಪಾಲನೆ ಮಾಡುತ್ತಿದ್ದ ರಾಕ್ಷಸ ಮಹಾಬಲೀಯು ಭಗವಾನ್ ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ಇದರಿಂದ ಬೆದರಿದ ದೇವತೆಗಳು ಶ್ರೀಮಾನ್ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ದಾನ ಶೂರನಾದ ಬಲಿ ಚಕ್ರವರ್ತಿಯು ಒಂದು ಯಜ್ಞ ಮಾಡುತ್ತಿರುವಾಗ, ಶ್ರೀಮಾನ್ ಮಹಾವಿಷ್ಣುವು ಒಬ್ಬ ಕುಬ್ಜ ಬ್ರಾಹ್ಮಣ ಬಾಲಕನಾಗಿ ಯಜ್ಞ ಮಾಡುತ್ತಿರುವ ಸ್ಥಳಕ್ಕೆ ಬರುತ್ತಾನೆ. ಮಹಾಬಲಿಗೆ ಆ ಬ್ರಾಹ್ಮಣ(ವಿಷ್ಣು) ತನ್ನ ರಾಜಸತ್ವವನ್ನು ಹಾಗು ಸಂಪತ್ತನ್ನು ತ್ಯಜಿಸುವಂತೆ ಹೇಳುತ್ತಾನೆ. ಅದಕ್ಕೆ ಒಪ್ಪಿದ ಮಹಾಬಲಿಯು ತನ್ನ ರಾಜ ಪದವಿಯನ್ನು ಮತ್ತು ಆತನಲ್ಲಿದ್ದ ಸಂಪತ್ತನ್ನು ತ್ಯಜಿಸುತ್ತಾನೆ. ಇದರಿಂದಾಗಿ ಲಕ್ಷ್ಮೀ ದೇವಿಯು ಮುಕ್ತಳಾಗುತ್ತಾಳೆ. ಬಲಿ ಚಕ್ರವರ್ತಿಯ ಭಕ್ತಿಗೆ ಮೆಚ್ಚಿದ ಶ್ರೀಹರಿಯು ಬಲಿಯನ್ನು ಅಮರನನ್ನಾಗಿ ಮಾಡಿ ಪಾತಾಳ ಲೋಕಕ್ಕೆ ಚಕ್ರವರ್ತಿಯನ್ನಾಗಿ ನೇಮಿಸಿದನು!! ಅಸುರನಿಂದ ಮುಕ್ತಳಾದ ಲಕ್ಷ್ಮೀ ದೇವಿಯನ್ನು ಆರಾಧಿಸುವುದಕ್ಕೋಸ್ಕರವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು ಭಾಗವತದಲ್ಲಿ ಹೇಳಲಾಗಿದೆ!! ಅಷ್ಟೇ ಅಲ್ಲದೇ, ಪುರಾಣಗಳು ಹೇಳುವ ಪ್ರಕಾರ ಬಲಿ ಚಕ್ರವರ್ತಿಯ ಭಕ್ತಿಗೆ ಮೆಚ್ಚಿದ ಶ್ರೀಹರಿಯು ಆಶ್ವೀಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆಗೈಯುವರು. ವರ್ಷದಲ್ಲಿ ಒಂದು ದಿನ ಭೂಮಂಡಲದಲ್ಲಿ ಬಲಿಯ ರಾಜ್ಯ ನಡೆಯುವಂತೆ ಅನುಗ್ರಹಿಸಿದ. ಬಲಿಪಾಡ್ಯದಂದು ಪೂರ್ತಿ ದಿನ ಬಲಿಯ ರಾಜ್ಯಭಾರ ನಡೆಯುತ್ತದೆ ಎಂಬುದು ನಂಬಿಕೆ. ಅಹಂಕಾರವೆಂಬುದು ತೊಲಗಿ ತ್ಯಾಗ, ನಿಷ್ಠೆ, ದೃಢತೆಗಳು ನೆಲೆಯಾಗಲಿ ಎಂಬುದು ಇದರ ಹಿಂದಿನ ಆಶಯವಾಗಿದೆ!!

ನರಕಾಸುರನ ಸಂಹಾರ

ಭಾಗವತದಲ್ಲಿ ದುಷ್ಟ ರಾಜನಾದ ನರಕಾಸುರನ ಬಗ್ಗೆ ತಿಳಿಸುತ್ತದೆ. ನರಕಾಸುರನು ಅತ್ಯಂತ ಶಕ್ತಿಶಾಲಿಯಾಗಿದ್ದ ಈತ ಲೋಕಕಂಡಕನಾಗಿದ್ದ ಈತ 16 ಸಾವಿರ
ರಾಜಪುತ್ರಿಯರನ್ನು ಸೆರೆಯಲ್ಲಿಟ್ಟದ್ದನು. ಹೀಗಾಗಿ ಆತನ ಪರಾಕ್ರಮದಿಂದ ಸ್ವರ್ಗ ಹಾಗು ನರಕ ಎರಡನ್ನು ವಶಪಡಿಸಿಕೊಂಡಿದ್ದನು!! ಇದರಿಂದ ಇವನ ಉಪಟಳ
ತಾಳಲಾರದೆ ಇಂದ್ರಾದಿ ದೇವತೆಗಳು ಶ್ರೀಕೃಷ್ಣನಲ್ಲಿ ಮೊರೆಹೋದರು. ಅಶ್ವೀಜ ಮಾಸದ ಬಹುಳ ಕೃಷ್ಣಪಕ್ಷ ಚತುದರ್ಶಿಯಂದು ಸಂಹಾರ ಮಾಡಿದನು. ತದನಂತರ ನರಕಾಸುರ ಬಂಧಿಖಾನೆಯಲ್ಲಿದ್ದ 16,000 ಮಹಿಳೆಯರನ್ನು ಕೃಷ್ಣನು ರಕ್ಷಣೆ ಮಾಡಿದನಂತೆ. ನರಕಾಸುರನನ್ನು ಶ್ರೀ ಕೃಷ್ಣನು ಕೊಂದ ಕಾರಣವೇ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ!!

ಪಾಂಡವರು ಹಿಂದಿರುಗುವಿಕೆ

ಮಹಾಭಾರತದ ಪ್ರಕಾರ ಪಾಂಡವರು ಕೌರವರೊಂದಿಗೆ ಸೋಲುತ್ತಾರೆ. ಇದರ ಪ್ರತಿಯಾಗಿ ಪಂಚ ಪಾಂಡವರಿಗೆ 12 ವರ್ಷಗಳ ಕಾಲ ಬಹಿಷ್ಕಾರ ಮಾಡಲಾಗುತ್ತದೆ. 12 ವರ್ಷಗಳ ಕಾಲ ಯಾವುದೇ ಆಧಾರವಿಲ್ಲದೇ ಸಾಮಾನ್ಯರಂತೆ ಜೀವನ ಸಾಗಿಸುತ್ತಾರೆ!! ತದನಂತರ ತಮ್ಮ 12 ವರ್ಷಗಳ ಬಹಿಷ್ಕಾರದಿಂದ ವಿಮುಕ್ತರಾಗಿದ್ದು, ಕಾರ್ತಿಕ ಅಮಾವಾಸ್ಯೆಯಂದು ಹಾಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.

ರಾಮನ ಜಯ

ಶ್ರೇಷ್ಟ ಹಿಂದೂ ಮಹಾಕಾವ್ಯ "ರಾಮಾಯಣ"ದ ಪ್ರಕಾರ, ದುಷ್ಟ ರಾಜನಾದ ರಾವಣನು ಸೀತೆಯನ್ನು ಅಪಹರಿಸಿರುತ್ತಾನೆ. ಹಾಗಾಗಿ ರಾವಣನನ್ನು ರಾಮನು ಕೊಂದು ತನ್ನ 14 ವರ್ಷಗಳ ವನವಾಸದ ನಂತರ ತಮ್ಮ ರಾಜಧಾನಿ ಅಯೋಧ್ಯಾಗೆ ಮರಳುತ್ತಾರೆ. ಆ ದಿನವು ಕಾರ್ತಿಕ ಅಮಾವಸ್ಯೆ ದಿನವಾಗಿರುತ್ತದೆ. ತಮ್ಮ ಅಚ್ಚುಮೆಚ್ಚಿನ ಅರಸನ ಮರಳುವಿಕೆಯಿಂದ ಜನರು ಮಣ್ಣಿನಿಂದ ದೀಪಗಳನ್ನು ಬೆಳಗಿಸಿ ಇಡೀ ನಗರವನ್ನೇ ಭವ್ಯವಾದ ರೀತಿಯಲ್ಲಿ ಅಲಂಕಾರ ಮಾಡಿ ಸ್ವಾಗತಿಸುತ್ತಾರೆ. ಹೀಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ರಾಮಾಯಣದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ವಿಕ್ರಮಾದಿತ್ಯನ ಪಟ್ಟಾಭಿಷೇಕ

ವಿಕ್ರಮಾದಿತ್ಯನ ಅಸಾಮಾನ್ಯವಾದ ಬುದ್ಧಿವಂತಿಕೆ, ಶೌರ್ಯ ಮತ್ತು ವೈಭವದಿಂದ ಪ್ರಸಿದ್ಧ ಭಾರತೀಯ ರಾಜನಾಗಿದ್ದಾನೆ. ಇದನ್ನು ವಾರ್ಷಿಕವಾಗಿ ಆಚರಣೆ ಮಾಡುವ ಮೂಲಕ ಗುರುತಿಸಲಾಗುತ್ತದೆ. ಶ್ರೇಷ್ಟ ಹಿಂದೂ ರಾಜರಲ್ಲಿ ಒಬ್ಬನಾದ ವಿಕ್ರಮಾದಿತ್ಯನು ಪೂರ್ವದ ಆಧುನಿಕ ಥೈಲ್ಯಾಂಡ್‍ನ ಪಶ್ಚಿಮದ ಆಥುನಿಕ ಸೌದಿ ಅರೇಬಿಯಾದ ಗಡಿಯವರೆವಿಗೂ ವಿಕ್ರಮಾದಿತ್ಯನು ಸಾಮ್ರಾಜ್ಯವನ್ನು ವಿಸ್ತರಿಸಿ ಆಳಿದನು. ಹೀಗಾಗಿ ದೀಪಾವಳಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಒಂದು ಧಾರ್ಮಿಕವಾದ ಉತ್ಸವೇ ಅಲ್ಲದೇ ಒಂದು ಐತಿಹಾಸಿಕವಾದ ಸಹಭಾಗಿತ್ವವನ್ನು ಕೂಡ ದೀಪಾವಳಿ ಹಬ್ಬ ಹೊಂದಿದೆ.

ಕಾಳಿ ದೇವತೆ

ಕಾಳಿ ದೇವತೆಯನ್ನು ಶ್ಯಾಮ ಕಾಳಿ ಎಂದು ಕೂಡ ಕರೆಯುತ್ತಾರೆ. ಕಾಳಿಯ 10 ಅವತಾರಗಳಲ್ಲಿ ಈ ಅವತಾರ ಮೊದಲನೆಯದು. ಪಾರ್ವತಿಯ ಸ್ವರೂಪವಾದ ಕಾಳಿಯು ಸ್ವರ್ಗ ಹಾಗು ಭೂಮಿಯ ಮೇಲೆ ಇರುವ ದುಷ್ಟರನ್ನು ಸಂಹಾರ ಮಾಡಲು ಜನಿಸಿದವಳು. ಈಕೆಯು ಕ್ರೌಯದಿಂದ ಮೆರೆಯುತ್ತಿದ್ದ ರಾಕ್ಷಸರನ್ನು ಕೊಂದ ನಂತರ ತನ್ನ ಕೋಪದ ನಿಯಂತ್ರಣ ಕಳೆದುಕೊಳ್ಳುತ್ತಾಳೆ. ತನ್ನ ದಾರಿಗೆ ಅಡ್ಡ ಬಂದವರನ್ನು ನಾಶ ಮಾಡುತ್ತಾ ಇರುತ್ತಾಳೆ ಆ ಸಮದಲ್ಲಿ ಮಹಾ ಶಿವನು ಅಡ್ಡ ಹೋಗುತ್ತಾನೆ. ಆಕೆಯ ಕಾಲಿನ ಕೆಳಗೆ ಶಿವನು ಇರುತ್ತಾನೆ. ಇದನ್ನು ನೆನೆಪಿಸಿಕೊಳ್ಳುವ ಸಲುವಾಗಿಯೇ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು ಕೂಡ ಹೇಳುತ್ತಾರೆ.

ಸುಗ್ಗಿ

ಈ ದೀಪಾವಳಿಯು ಬೇಳೆಗಳ ಸಮಯದಲ್ಲಿ ಬರುವುದರಿಂದ ಶ್ರೀಮಂತವಾದ ಅಕ್ಕಿ ಸಾಗುವಳಿಗಳನ್ನು ನೀಡಿ ಅದರ ಫಲವನ್ನು ನೀಡುತ್ತದೆ. ಭಾರತವು ಕೃಷಿ-ಆರ್ಥಿಕ ಸಮಾಜವಾಗಿದ್ದು, ಸುಗ್ಗಿಯ ಮಹತ್ವವನ್ನು ನೀಡಿ ಆಚರಣೆ ಮಾಡುತ್ತದೆ ಎಂದೇ ಆಗಿದೆ. ಹಾಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು
ಹೇಳಲಾಗುತ್ತಿದೆ.

ಹೊಸ ವರ್ಷ

ಹಿಂದೂ ಧರ್ಮ ಪ್ರಪಂಚದ ಮೂರನೆಯ ದೊಡ್ಡ ಧರ್ಮವಾಗಿದೆ. ಈ ಸಮಯದಲ್ಲಿ ಹಿಂದೂ ಉದ್ಯಮಿಗಳು ಪೂಜೆಗಳನ್ನು ಮಾಡುತ್ತಾರೆ. ಇದರ ಸಂಕೇತ ಹಿಂದು
ಧರ್ಮದ ಹೊಸ ವರ್ಷ ಪ್ರಾರಂಭವಾಗಿದೆ ಎಂದೇ ಆಗಿದೆ. ಹಾಗಾಗಿಯೇ ದೀಪಗಳನ್ನು ಬೆಳಗಿ ದೀಪಾವಳಿ ಹಬ್ಬದಂದು ಹೊಸವರ್ಷವನ್ನು ಆಚರಿಸುತ್ತಾರೆ ಎಂದು
ಹೇಳಲಾಗಿದೆ.

ಸಿಖ್‍ರಿಗೆ ವಿಶೇಷವಾದ ದಿನ

ಸಿಖ್‍ರಿಗೆ ದೀಪಾವಳಿ ಅತ್ಯಂತ ವಿಶೇಷವಾದ ದಿನವೆಂದು ಮಹತ್ವವನ್ನು ಪಡೆದಿದೆ. 3 ನೇ ಸಿಖ್ ಗುರುವಾದ ಅಮರ್ದಾಸ್ ಎಲ್ಲಾ ಸಿಖ್ ಗುರುಗಳ ಆಶೀರ್ವಾದಗಳನ್ನು ಪಡೆದುಕೊಳ್ಳಲು ಸಂಧಿಸುವ ಸಂದರ್ಭದಲ್ಲಿ ದೀಪಗಳ ಉತ್ಸವವನ್ನು ಸ್ಥಾಪಿಸಿದರು. ಅಮೃತಸರದ ಗೋಲ್ಡನ್ ಟೆಂಪಲ್ ಅಡಿಪಾಯವನ್ನು 1577 ರಲ್ಲಿ ದೀಪಾವಳಿದಿನದಂದು ಹಾಕಲಾಯಿತು.

ವರ್ಧಮಾನ ಮಹಾವೀರ ಜ್ಞಾನೋದಯ

ಜೈನರಿಗೆ ದೀಪಾವಳಿ ಹಬ್ಬವು 15,527 ಬಿ.ಸಿಯಲ್ಲಿಯೇ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಜೈನರ 24 ಮತ್ತು ಕೊನೆಯ ತೀರ್ಥಂಕರರು ಮತ್ತು ಆಥುನಿಕ ಜೈನ ಧರ್ಮದ ಸ್ಥಾಪಕನ ಜ್ಞಾನೋದಯವನ್ನು ನೆನಪಿಸುತ್ತದೆ.

ಸ್ವಾಮಿ ದಯಾನಂದ ಸರಸ್ವತಿ ಜ್ಞಾನೋದಯ

ಕಾರ್ತಿಕ ದೀಪಾವಳಿ ದಿನದಂದು ಹಿಂದೂ ಧರ್ಮದ ಶ್ರೇಷ್ಠ ಸುಧಾರಣಾಧಿಕಾರಿಗಳಾದ ಸ್ವಾಮಿ ದಯಾನಂದ ಸರಸ್ವತಿಯವರು ಜ್ಞಾನೋದಯ ಪಡೆದಿದ್ದರಿಂದ ಆ
ಮಹತ್ವಾಕಾಂಕ್ಷೆಯ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ. 1857 ರಲ್ಲಿ ಹಿಂದೂ ಧರ್ಮವನ್ನು ಶುದ್ಧಿಕರಿಸಲು ಹಿಂದೂ ಸುಧಾರಣಾ ಚಳುವಳಿ "ಸೊಸೈಟಿ ಆಫ್ ನೊಬೆಲ್ಸ್" ಎಂಬ ಆರ್ಯ ಸಮಾಜವನ್ನು ಸ್ಥಾಪನೆ ಮಾಡಿದರು. ಪ್ರತಿ ದೀಪಾವಳಿಯಂದು ಈ ಮಹಾನ್ ಸುಧಾರಕರನ್ನು ಹಿಂದೂಗಳು ನೆನಪಿಸಿಕೊಳ್ಳುತ್ತಾರೆ.

"ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ"

ಎನ್ನುವ ಶರಣರ ನುಡಿಯಂತೆ ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದದ ಪ್ರಾಪ್ತಿಮಾಡಿಕೊಳ್ಳುವುದೇ ದೀಪಾವಳಿಯ ಯತಾರ್ಥ ಆಚರಣೆ!!

ಎಲ್ಲರಿಗೂ ದೀಪವಾಳಿ ಹಬ್ಬದ ಶುಭಾಷಯಗಳು…………!!

ಶನಿವಾರ, ಅಕ್ಟೋಬರ್ 13, 2018

Mysore dasara

ನವರಾತ್ರಿ

🌷🌷🌷
ನಮ್ಮ ನಾಡ ಹಬ್ಬದ ನವರಾತ್ರಿಯ ಬಗ್ಗೆ ಒಂದು ಕಿರು ಮಾಹಿತಿ...🔖🔖🔖

ನವರಾತ್ರಿಯ ಇತಿಹಾಸ

ಅ. ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ಕೊಂದನು.

ಆ. ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

ನವರಾತ್ರಿಯ ಆಚರಣೆಯ ಮಹತ್ವ

೧. ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.

೨. ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ 'ಶ್ರೀ ದುರ್ಗಾದೇವ್ಯೈ ನಮಃ|' ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ

ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುಕ್ಲ ಪಾಡ್ಯಕ್ಕೆ ಈ ವ್ರತವು ಪ್ರಾರಂಭವಾಗುತ್ತದೆ.

೧. ಮನೆಯಲ್ಲಿ ಪವಿತ್ರ ಜಾಗದಲ್ಲಿ ಒಂದು ವೇದಿಕೆಯನ್ನು (ಪೀಠವನ್ನು) ತಯಾರಿಸಿ ಅದರ ಮೇಲೆ ಸಿಂಹಾಸನದ ಮೇಲೆ ಕುಳಿತಿರುವ ಅಷ್ಟಭುಜ ದೇವಿಯನ್ನು ಹಾಗೂ ನವಾರ್ಣವಯಂತ್ರ ವನ್ನು ಸ್ಥಾಪಿಸುತ್ತಾರೆ. 

ಯಂತ್ರದ ಪಕ್ಕದಲ್ಲಿ ಘಟಸ್ಥಾಪನೆ ಮಾಡಿ ಅದಕ್ಕೂ ದೇವಿಗೂ ವಿಧಿಪೂರ್ವಕ ಪೂಜೆಯನ್ನು ಮಾಡುತ್ತಾರೆ.

೨. ನವರಾತ್ರಿ ಮಹೋತ್ಸವದಲ್ಲಿ ಕುಲಾಚಾರದಂತೆ ಘಟಸ್ಥಾಪನೆ ಮತ್ತು ಮಾಲಾಬಂಧನ ಮಾಡಬೇಕು. ಹೊಲದಲ್ಲಿನ ಮಣ್ಣನ್ನು ತಂದು ಅದರಿಂದ ಎರಡು ಬೆರಳುಗಳ ಗಾತ್ರದಷ್ಟು ಚೌಕಾಕಾರ ಮಾಡಿ ಅದರಲ್ಲಿ (ಐದು ಅಥವಾ) ಏಳು ಧಾನ್ಯಗಳನ್ನು ಹಾಕಬೇಕು. ಜೋಳ, ಗೋಧಿ, ಎಳ್ಳು, ಹೆಸರು, ನವಣೆ, ಸಾವಿಕಾಳು (ತೃಣ ಧಾನ್ಯ) ಮತ್ತು ಕಡಲೆ ಇವು ಸಪ್ತಧಾನ್ಯಗಳಾಗಿವೆ.

೩. ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂವು, ಗರಿಕೆ, ಅಕ್ಷತೆ, ಅಡಿಕೆ, ಪಂಚಪಲ್ಲವ, ಪಂಚರತ್ನ ಅಥವಾ ನಾಣ್ಯ ಮುಂತಾದ ವಸ್ತುಗಳನ್ನು ಹಾಕಬೇಕು.

೪. ಸಪ್ತಧಾನ್ಯ ಮತ್ತು ಕಲಶ ಸ್ಥ್ಥಾಪನೆಯ ವೈದಿಕ ಮಂತ್ರಗಳು ಗೊತ್ತಿಲ್ಲದಿದ್ದರೆ, ಪುರಾಣೋಕ್ತ ಮಂತ್ರಗಳನ್ನು ಹೇಳಬೇಕು. 

ಅವೂ ಬರದಿದ್ದರೆ ಆಯಾ ವಸ್ತುಗಳ ಹೆಸರು ಹೇಳಿ 'ಸಮರ್ಪಯಾಮಿ' ಎಂದು ನಾಮಮಂತ್ರದ ಉಪಯೋಗವನ್ನು ಮಾಡಬೇಕು. ಕಲಶದೊಳಗೆ ತಲುಪುವಂತೆ ಮಾಲೆಯನ್ನು ಕಟ್ಟಬೇಕು.

೫. ಒಂಭತ್ತು ದಿನಗಳವರೆಗೆ ಪ್ರತಿದಿನ ಕುಮಾರಿಯ ಪೂಜೆಯನ್ನು ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. 

ಮುತ್ತೈದೆ ಎಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿ ಯಲ್ಲಿ ಶಕ್ತಿಯ ಪ್ರಮಾಣವು ಜಾಸ್ತಿಯಿರುತ್ತದೆ.

೬. 'ಅಖಂಡ ದೀಪಪ್ರಜ್ವಲನೆ, ಆ ದೇವತೆಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತ ಶತಿಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, 

ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

೭. ಭಕ್ತನಿಗೆ ಉಪವಾಸವಿದ್ದರೂ ದೇವತೆಗೆ ಎಂದಿನಂತೆ ಅನ್ನದ ನೈವೇದ್ಯವನ್ನು ಮಾಡಬೇಕು.

೮. ಈ ಕಾಲದಲ್ಲಿನ ಆಚಾರದ ಒಂದು ಉತ್ಕೃಷ್ಟ ಅಂಗವೆಂದು ಶ್ಮಶ್ರೂ ಮಾಡದಿರುವುದು (ಗಡ್ಡ-ಮೀಸೆಗಳ ಕೂದಲು ಮತ್ತು ತಲೆಯ ಕೂದಲನ್ನು ಕತ್ತರಿಸದಿರುವುದು), 

ಕಠೋರ ಬ್ರಹ್ಮಚರ್ಯ, ಮಂಚ ಮತ್ತು ಹಾಸಿಗೆಯ ಮೇಲೆ ಮಲಗದಿರುವುದು, ಗಡಿಯನ್ನು ಉಲ್ಲಂಘಿಸದಿರುವುದು, ಪಾದರಕ್ಷೆಗಳನ್ನು ಉಪಯೋಗಿಸದಿರುವುದು ಮುಂತಾದ ನಿಯಮಗಳ ಪಾಲನೆಯನ್ನು ಮಾಡುತ್ತಾರೆ.

೯. ನವರಾತ್ರಿಯ ಸಂಖ್ಯೆಗೆ ಒತ್ತುಕೊಟ್ಟು ಕೆಲವರು ಕೊನೆಯ ದಿನವೂ ದೇವಿಯನ್ನು ಇಡುತ್ತಾರೆ; ಆದರೆ ಶಾಸ್ತ್ರಕ್ಕನುಸಾರ ಕೊನೆಯ ದಿನ ನವರಾತ್ರಿಯ ವಿಸರ್ಜನೆಯಾಗುವುದು ಆವಶ್ಯಕವಾಗಿದೆ. 

ಆ ದಿನ ಸಮಾರಾಧನೆ (ಭೋಜನಪ್ರಸಾದ) ಆದ ನಂತರ ಸಮಯವಿದ್ದರೆ ಅದೇ ದಿನ ಎಲ್ಲ ದೇವರನ್ನು ತೆಗೆದು ಅಭಿಷೇಕ ಮತ್ತು ಷೋಡಶೋಪಚಾರ ಪೂಜೆಯನ್ನು ಮಾಡಬೆಕು, ಸಮಯವಿಲ್ಲದಿದ್ದರೆ ಮರುದಿನ ಎಲ್ಲ ದೇವರಿಗೂ ಪೂಜಾಭಿಷೇಕಗಳನ್ನು ಮಾಡಬೇಕು.

೧೦. ದೇವಿಯ ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಬಿತ್ತಿದ ಸಪ್ತಧಾನ್ಯಗಳ ಸಸಿಗಳನ್ನು ದೇವರಿಗೆ ಅರ್ಪಿಸುತ್ತಾರೆ ಹಾಗೂ 'ಶಾಕಂಭರಿದೇವಿ' ಎಂದು ತಿಳಿದು ಸ್ತ್ರೀಯರು ಅವುಗಳನ್ನು ತಲೆಯಲ್ಲಿ ಧರಿಸಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಾರೆ.

೧೧. ನವರಾತ್ರಿಯನ್ನು ಪ್ರಾರಂಭಿಸುವಾಗ ಅಥವಾ ಸಮಾಪ್ತಿ ಮಾಡುವಾಗ ದೇವರ ಉದ್ವಾರ್ಜನೆಯನ್ನು (ಸುಗಂಧಿತ ದ್ರವ್ಯಗಳಿಂದ ಸ್ವಚ್ಛಗೊಳಿಸುವುದು ಮತ್ತು ಲೇಪವನ್ನು ಹಚ್ಚುವುದು) ಅವಶ್ಯ ಮಾಡಬೇಕು. 

ಉದ್ವಾರ್ಜನೆ ಮಾಡಲು ನಿತ್ಯದಂತೆ ನಿಂಬೆಕಾಯಿ, ಭಸ್ಮ ಮುಂತಾದವುಗಳನ್ನು ಉಪಯೋಗಿಸಬೇಕು. ರಂಗೋಲಿ ಅಥವಾ ಪಾತ್ರೆ ತಿಕ್ಕುವ ಚೂರ್ಣವನ್ನು ಉಪಯೋಗಿಸಬಾರದು.

೧೨. ಕೊನೆಗೆ, ಸ್ಥಾಪಿಸಿದ ಘಟ ಮತ್ತು ದೇವಿಯನ್ನು ವಿಸರ್ಜಿಸಬೇಕು.

೧೩. ನವರಾತ್ರಿ ಅಥವಾ ಇತರ ಧಾರ್ಮಿಕ ವಿಧಿಗಳಲ್ಲಿ ದೀಪವು ಯಾವಾಗಲೂ ಉರಿಯುತ್ತಿರಬೇಕು. ಇದು ಪೂಜಾವಿಧಿಯ ಅಂಗವಾಗಿದೆ. 

ಆದುದರಿಂದ ದೀಪವು ಗಾಳಿ, ಎಣ್ಣೆ ಕಡಿಮೆಯಾಗುವುದು, ಉರಿದು ಕಪ್ಪಾಗುವುದು ಮುಂತಾದ ಕಾರಣಗಳಿಂದಾಗಿ ನಂದಿದರೆ ಆ ಕಾರಣವನ್ನು ದೂರಗೊಳಿಸಿ ದೀಪವನ್ನು ಪುನಃ ಉರಿಸಬೇಕು ಮತ್ತು ಪ್ರಾಯಶ್ಚಿತ್ತವೆಂದು ಅಧಿಷ್ಠಾನದೇವತೆಯ ೧೦೮ ಅಥವಾ ೧೦೦೮ ರಷ್ಟು ಜಪ ಮಾಡಬೇಕು.

೧೪. ದೇವಿಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು – 'ಹೇ ದೇವಿ, ನಾವು ಶಕ್ತಿಹೀನರಾಗಿದ್ದೇವೆ, ಅಪರಿಮಿತ ಭೋಗವನ್ನು ಭೋಗಿಸಿ ಮಾಯಾಸಕ್ತರಾಗಿದ್ದೇವೆ. ಹೇ ಮಾತೆ, ನೀನು ನಮಗೆ ಬಲವನ್ನು ನೀಡುವವಳಾಗು, ನಿನ್ನ ಶಕ್ತಿಯಿಂದ ನಾವು ಅಸುರೀ ಪ್ರವೃತ್ತಿಯನ್ನು ನಾಶ ಮಾಡುವಂತಾಗಲಿ.'

ಕೊಡ ಊದುವುದು

ಅಷ್ಟಮಿಗೆ ಸ್ತ್ರೀಯರು ಶ್ರೀಮಹಾಲಕ್ಷ್ಮೀದೇವಿಯನ್ನು ಪೂಜಿಸುತ್ತಾರೆ ಮತ್ತು ಕೊಡ ಊದುತ್ತಾರೆ.

ಪ್ರಾಂತಭೇದ: ಗುಜರಾತಿನಲ್ಲಿ ಮಾತೃಶಕ್ತಿಯ ಪ್ರತೀಕವೆಂದು ನವರಾತ್ರಿಯಲ್ಲಿ ಅನೇಕ ರಂಧ್ರಗಳಿರುವ ಮಡಕೆಯಲ್ಲಿ ದೀಪವನ್ನಿಟ್ಟು ಪೂಜಿಸುತ್ತಾರೆ. 

ಸ್ತ್ರೀಯ ಸೃಜನಾತ್ಮಕತೆಯ ಪ್ರತೀಕವೆಂದು ಒಂಭತ್ತು ದಿನಗಳ ಕಾಲ ಪೂಜಿಸಲ್ಪಡುವ 'ದೀಪ ಗರ್ಭ'ದಲ್ಲಿನ 'ದೀಪ' ಎನ್ನುವ ಶಬ್ದವು ಲೋಪವಾಗಿ ಗರ್ಭ-ಗರಭೋ-ಗರಬೋ ಅಥವಾ ಗರಬಾ ಎನ್ನುವ ಶಬ್ದವು ಪ್ರಚಲಿತವಾಯಿತು.

ಗರಬಾ ಆಡುವುದು ಎಂದರೇನು ? : ಗರಬಾ ಆಡುವುದಕ್ಕೆ ಹಿಂದೂ ಧರ್ಮದಲ್ಲಿ ಚಪ್ಪಾಳೆಯ ಲಯಬದ್ಧ ನಾದದಲ್ಲಿ ದೇವಿಯ ಭಕ್ತಿರಸಪೂರ್ಣ ಗುಣಗಾನಾತ್ಮಕ ಭಜನೆಯನ್ನು ಮಾಡುವುದು ಎಂದು ಹೇಳುತ್ತಾರೆ.

ಗರಬಾ ನೃತ್ಯವನ್ನು ಎರಡು ಸಲ ಚಪ್ಪಾಳೆಗಳನ್ನು ತಟ್ಟಿ ಆಡಬೇಕೋ ಅಥವಾ ಮೂರು ಸಲ ಚಪ್ಪಾಳೆಗಳನ್ನು ತಟ್ಟಿ ಆಡಬೇಕೋ ? : 

ಮೂರು ಸಲ ಲಯಬದ್ಧ ಚಪ್ಪಾಳೆಗಳನ್ನು ಬಾರಿಸುತ್ತಾ ದೇವಿಯ ಗುಣಗಾನ ಮಾಡುವುದು ಹೆಚ್ಚು ಸೂಕ್ತವಾಗಿದೆ ಅಲ್ಲದೇ ಇದು ಫಲದಾಯಕ ಸಹ ಆಗಿರುತ್ತದೆ.

ನವರಾತ್ರಿಯ ದಿನಗಳಲ್ಲಿ ಬಿಡಿಸಬೇಕಾದ ರಂಗೋಲಿಗಳು (12 ಚುಕ್ಕೆ, 12 ಸಾಲು)

ಈ ರಂಗೋಲಿಗಳು ದೇವಿಯ ತತ್ತ್ವವನ್ನು ಆಕರ್ಷಿಸುತ್ತವೆ ಮತ್ತು ಪ್ರಕ್ಷೇಪಿಸುತ್ತವೆ.

ದಸರಾ ಹಬ್ಬದ ಮಹತ್ವ

ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. 

ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.

ನವರಾತ್ರೋತ್ಸವದಲ್ಲಿನ ಅಯೋಗ್ಯಪದ್ಧತಿಗಳನ್ನು ತಡೆಗಟ್ಟಿ ಉತ್ಸವದ ಪಾವಿತ್ರ್ಯತೆಯನ್ನು ಕಾಪಾಡಿರಿ!

ಹಿಂದೆ 'ಗರಬಾ' ನೃತ್ಯದ ಸಮಯದಲ್ಲಿ ದೇವಿಯ, ಕೃಷ್ಣಲೀಲೆಯ ಮತ್ತು ಸಂತರು ರಚಿಸಿದ ಗೀತೆಗಳನ್ನು ಹೇಳಲಾಗುತ್ತಿತ್ತು.